Slide
Slide
Slide
previous arrow
next arrow

ಧಾಮುಲ್ ಚುನಾವಣೆ: ಎಲ್ಲ ಹಾಲಿ ನಿರ್ದೇಶಕರಿಗೆ ಗೆಲುವು

300x250 AD

ಶಿರಸಿ: ತೀವ್ರ ಕುತೂಹಲ ಮೂಡಿಸಿದ್ದ ಧಾರವಾಡ ಹಾಲು ಒಕ್ಕೂಟ ನಿರ್ದೇಶಕ ಸ್ಥಾನಕ್ಕೆ ಭಾನುವಾರ ಧಾರವಾಡದಲ್ಲಿ ನಡೆದ ಚುನಾವಣೆಯಲ್ಲಿ ಶಿರಸಿ ಕ್ಷೇತ್ರದಿಂದ ಹಾಲಿ ನಿರ್ದೇಶಕ ಸುರೇಶ್ಚಂದ್ರ ಕೆಶಿನ್ಮನೆ ವಿಜಯಮಾಲೆ ಧರಿಸಿದ್ದಾರೆ. ಒಟ್ಟೂ 85 ಮತಗಳಲ್ಲಿ 70 ಮತಗಳನ್ನು ಪಡೆಯುವುದರ ಮೂಲಕ ಭರ್ಜರಿ ಗೆಲುವನ್ನು ದಾಖಲಿಸಿದ್ದಾರೆ. ಪ್ರತಿಸ್ಪರ್ಧಿ ಉಮಾಮಹೇಶ್ವರ ಹೆಗಡೆ 14 ಮತಗಳನ್ನು ಪಡೆದಿದ್ದಾರೆ.

ಯಲ್ಲಾಪುರ ಕ್ಷೇತ್ರದಿಂದ ಶಂಕರ ಹೆಗಡೆ 68 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಪ್ರಶಾಂತ ಸಭಾಹಿತ 23 ಮತಗಳನ್ನು ಪಡೆದರು. ಸಿದ್ದಾಪುರ ಕ್ಷೇತ್ರದಿಂದ ಪರಶುರಾಮ ನಾಯ್ಕ 37 ಮತಗಳನ್ನು ಪಡೆದು ಗೆಲುವು ಸಾಧಿಸಿದರು. ಪ್ರತಿಸ್ಪರ್ಧಿಗಳಾದ ಸಹನಾ ಭಟ್ಟ 27 ಮತ ಹಾಗು ಮಂಜುನಾಥ 7 ಮತಗಳನ್ನು ಪಡೆದಿದ್ದಾರೆ. ಆ ಮೂಲಕ ಮೂವರೂ ಸಹ ಹಾಲಿ ನಿರ್ದೇಶಕರೇ ಆಯ್ಕೆಯಾಗಿದ್ದಾರೆ.

300x250 AD
Share This
300x250 AD
300x250 AD
300x250 AD
Back to top